ಮನೆಯಿಂದ ಮನೆಗೆ
(ಹಾಸನದ ಮನೆಮನೆ ಕವಿಗೋಷ್ಟಿಯಲ್ಲಿ ಪ್ರಸ್ತುತಗೊಂಡ ಕೆಲವು ಕವನಗಳ ಸಂಗ್ರಹ)
ವನದೇವಿಯ ಅಳಲು
ವನದೇವಿಯ ಅಳಲು
ಓ ಮಾನವನೇ, ಓ ಮಾನವನೇ
ನಾ ನಿನ್ನಯ ಬಾಳಿನ ಬೆಳಕಾದೆ
ನನ್ನುಪಕಾರವ ಮರೆತಿಹ ನೀನು
ನನ್ನಯ ಬಾಳಿಗೆ ಮುಳುವಾದೆ || ಓ...||
ಕಲುಷಿತ ಪರಿಸರ ದೋಷದ ಮಣಿಸಿ
ಸುಲಲಿತಗೊಳಿಸುವೆ ನಾನು
ದೂಷಿತ ಮನಸಿನ ವಿಷವನು ಉಣಿಸಿ
ದುರುಳತೆ ತೋರುವೆ ನೀನು || ಓ... |
ಮಾನವನಾಗಲಿ ಕಾನನವಾಗಲಿ
ಸೃಷ್ಟಿಯ ದೃಷ್ಟಿಗೆ ಒಂದೇ
ಮಾನವೀಯತೆಯ ಧರ್ಮದ ಮರೆತು
ದಾನದ ನೀನಾಗಿ ಮೆರೆದೆ || ಓ.... ||
ವನ್ಯ ಮೃಗಗಳು ವೃಕ್ಷರಾಜಿಗಳು
ಎನ್ನಯ ಗರ್ಭದ ಶಿಸುಗಳು
ಧನ ದಾಹದ ಹುಸಿ ಆಮಿಷಕಾಗಿ
ಆದವು ಬಲಿಯಾ ಪಶುಗಳು || ಓ... ||
ಏಳು ಏಳು, ಎಚ್ಚೆತ್ತುಕೊಳ್ಳು
ಕೆಲಕ್ಷಣಗಳ ಸಮಯವು ಲಭಿಸಿಹುದು
ಕೀಳು ಭಾವನೆಯ ಮನದಿಂ ತೊಡೆಯಲು
ತಂಪುಗಾಳಿಯು ಬೀಸಿಹುದು || ಓ ... ||
ಲೇಖಕಿ- ಅರಿಯದಾ ಬಾಲೆ
ಜ್ಯೋತಿ
ಜ್ಯೋತಿ ಬೆಳಗುತಿಹುದು
ಕನ್ನಡದಾ ಕಂದನೆ
ಜಾತಿ ಭೇದ ಮರೆತು ನಡೆ
ನಂಬಿ ಸೃಷ್ಡಿಯೊಂದನೆ
ನಾನು ನೀನು ಯಾರೋ ಏನೋ
ಯಾತಕಾಗಿ ಬಂದೆವೋ
ತಾನು ತನದು ಸ್ವಾರ್ಥವೇಕೋ
ಯಾರಿಗಾಗಿ ಬಂದವೋ
ಸಾನುರಾಗದಿಂದ ಇರಲು
ಬಾನು-ಭುವಿಯ ಚಂದವೋ
ಮಾನ ನೀಡಿ ಮಾನ್ಯನಾಗು
ಶೂನ್ಯ ನೀನು ಆಗೆಯೆಂದು
ಅನ್ಯ ಭಾವ ತೊಲಗಲಿ
ಅನನ್ಯ ಸೇವೆ ಜನತೆಗಾಗಿ
ಮುಡಿಪು ಬಾಳಿಗಾಗಿ
ನಾನು ನೀನು ಯಾರೋ ಏನೋ
ಯಾತಕಾಗಿ ಬಂದೆವೋ
ತಾನು ತನದು ಸ್ವಾರ್ಥವೇಕೋ
ಯಾರಿಗಾಗಿ ಬಂದವೋ
ಸಾನುರಾಗದಿಂದ ಇರಲು
ಬಾನು-ಭುವಿಯ ಚಂದವೋ
ಮಾನ ನೀಡಿ ಮಾನ್ಯನಾಗು
ಶೂನ್ಯ ನೀನು ಆಗೆಯೆಂದು
ಅನ್ಯ ಭಾವ ತೊಲಗಲಿ
ಅನನ್ಯ ಸೇವೆ ಜನತೆಗಾಗಿ
ಮುಡಿಪು ಬಾಳಿಗಾಗಿ
ಲೇಖಕಿ - ಅರಿಯದ ಬಾಲೆ